Posts

Akaashada Gaali Lyrics | Kyaabre | Tharle Box

Image
ಆಕಾಶದಾ ಗಾಳಿ ಬಿರುಗಾಳಿ Lyrics Composed by: Siddhant KS & Geeth Vaz Lyrics: MC Bijju, Siddhant KS, Vijay Krishna ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ನನ್ನೆಡೆ   ಆ ಬಾಣದಾ ದಾರಿ ಮರುದಾರಿ, ನಿನ್ನದೇ ನನ್ನೆಡೆ  ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ  ನಡುದಾರಿ ನಾ ನಿಂತ ದಾರಿ ಪ್ರತಿಬಾರಿ ನಿನ್ನೆಡೆ  ಆಕಾಶದಾ ಗಾಳಿ ಬಿರುಗಾಳಿ, ನನ್ನದೇ ನಿನ್ನೆಡೆ  ಆ ಬಾಣದಾ ದಾರಿ ಮರುದಾರಿ, ನಿನ್ನದೇ ನನ್ನೆಡೆ ನನ್ನೆಡೆ  ಸಣ್ಣದೊಂದು ಕಲ್ಪನೆ ಸಾವಿರಾರು ಯಾತನೆ  ಏನೋ ಹೊತ್ತುಕೊಂಡು ಕಾಣೆಯಾಯ್ತು ಯಾಕೋ ಬೇಗನೆ  ಸೋಲು ಸುಂಕ ಕಟ್ಟುತ್ತಾ ಗೆಲ್ಲೊ ಬಿಂಕ ನಿಶ್ಚಿತ  ಕಡಿವಾಣ ಬಾನದಾರಿಗಿದು ಎಂಥಾ ಅದ್ಭುತ  ಗರಿಗೇಕೆ ಇಲ್ಲಿ ಗಾಳಿಯಾ ಭಯಾ ಅಂಜದೆ ಸಾಗಿಹೆ  ಬಿರುಗಾಳಿ ಗರಿ ಕಂಡು ವಿಸ್ಮಯಾ ಸ್ವಂತಿಕೆ ತಂದಿದೆ ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ  ನಡುದಾರಿ ನಾ ನಿಂತ ದಾರಿ ಪ್ರತಿಬಾರಿ ನಿನ್ನೆಡೆ  ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ ಆಕಾಶದಾ ಗಾಳಿ ಬಿರುಗಾಳಿ, ನಿನ್ನದೇ

ತೀರ್ಥಯಾತ್ರೆ - ಭಾಗ ೧

Image
  ತೀರ್ಥಯಾತ್ರೆ  ಭಾಗ ೧ -  ಅಂತೂ ಇಂತೂ ಕೋಟ ಬಂತು... -  ಯತೀಂದ್ರ ಆಚಾರ್ಯ   ಕೊರೊನ ಭಯದಿಂದ ವರ್ಷವಿಡೀ ಬೆಂಗಳೂರಲ್ಲೇ ಇದ್ದ ನಮಗೆ ಒಂದು ಪ್ರವಾಸ ಅತ್ಯಗತ್ಯವಾಗಿತ್ತು. ಆಗಸ್ಟ್ ತಿಂಗಳಲ್ಲಿ ಶುರುವಾದ ನಮ್ಮ ೫ ಜನರ ಸಹ್ಯಾದ್ರಿ ಪ್ರವಾಸದ ಚರ್ಚೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು ಅಕ್ಟೋಬರ್ ತಿಂಗಳ ಗಾಂಧಿಜಯಂತಿ ರಜೆಯಂದು. ಮುಂಜಾನೆ ಬೇಗ ಎದ್ದುಬಿಡಬೇಕೆಂಬ ಯೋಚನೆಯಲ್ಲೇ ರಾತ್ರಿ ಹೊತ್ತು ಕಳೆದರು ನಿದ್ರೆಯ ಸುಳಿವೇ ಇರಲಿಲ್ಲ. ಹೇಗೋ ಸಣ್ಣದೊಂದು ನಿದ್ರೆ  ತೆಗೆದು , ಬೇಗನೇ ಎದ್ದು ನಿತ್ಯಕರ್ಮಗಳ ಮುಗಿಸಿ ಎಲ್ಲರೂ ಬೆಂಗಳೂರು ಬಿಡುವ ಹೊತ್ತಿಗೆ ಘಂಟೆ ೭ ಕಳೆದಿತ್ತು. ಗಾಡಿ ಹೆದ್ದಾರಿ ಸಮೀಪಿಸುತ್ತಿದಂತೆ ಒಮ್ಮೆಲೇ ಶುರುವಾಯ್ತು ವಾಹನ ದಟ್ಟಣೆ. ಸುಂಕ ವಸೂಲಾತಿ ಗಡಿಯ ಬಳಿ ಬಂದಾಗಲಂತೂ ಇಡೀ ಬೆಂಗಳೂರಿಗೆ ಬೆಂಗಳೂರೇ ಊರು ಬಿಟ್ಟಂತಿತ್ತು! ಊರು ದೂರವಾಗುತ್ತಾ ಹೋದಂತೆ ವಾಹನ ದಟ್ಟಣೆಯೂ ಕಡಿಮೆಯಾಯ್ತು. ಹಾಸನ - ಬೇಲೂರು - ಮೂಡಿಗೆರೆ ಮಾರ್ಗವಾಗಿ ಹೊರನಾಡು ಕ್ಷೇತ್ರಕ್ಕೆ ಹೊರಟ್ಟಿದ್ದೆವು. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ದಾಟುವಾಗ ಮನಸ್ಸಲ್ಲಿ ಹೇಳತೀರದ ಸಂತಸ. ಸಾಹಿತ್ಯ ಲೋಕದ ಒಂಟಿ ಸಲಗ ಎಂದೇ ಖ್ಯಾತಿಯಾದ ಮತ್ತು ನನ್ನ ನೆಚ್ಚಿನ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಊರು!   ಮನಸ್ಸು ಧನ್ಯತಾ ಭಾವದಲ್ಲಿ ತೇಲಿತ್ತು. ಮುಂದೆ ಕೊಟ್ಟಿಗೆಹಾರ, ಮಲೆನಾಡಿಗೆ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುವಂತೆ ಬಾಗಿ ನಿಂ...

ತೋಚಿದ್ದು ಗೀಚು - ಕವನಗಳು

Image
ತೋಚಿದ್ದು ಗೀಚು - ಕವನಗಳು  -  ಯತೀಂದ್ರ ಆಚಾರ್ಯ ನಡಿಗೆಯಾ ಪ್ರತಿ ಹೆಜ್ಜೆಗೂ ಮನವು ಕೇಳಿದೆ  ನಿನ್ನಯಾ ಅಪ್ಪಣೆ ನನ್ನಯಾ ಪ್ರತಿ ಮಾತಿನ ಎಲ್ಲಾ ಭಾವವೂ  ನಿನಗೆಯೇ ಅರ್ಪಣೆ  ಇನಿಯಾ ಈ ಸಂಜೆಯು ಏನಿತು ಹಿತವಾಗಿದೇ ಬಳಿಯಲಿ ನೀ ಸುಳಿದಾಡಲು ಮನವು ಹಗುರಾಗಿದೆ  ಈಗ ಬೆಚ್ಚನೆ ಅಪ್ಪುಗೆ ಸಾಕೆನು ಸಲ್ಲಾಪಕೆ..!   <3   <3   <3   <3   <3   <3 <3 ಮೊದಲನೇ ನೋಟದೆ ಸೆರೆಯಾದೆ ನನ್ನಲಿ, ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ ಕಾಡಿಲ್ಲ ಯಾರು ಹಿಂದೆಂದೂ ಈ ಪರಿಯಲಿ, ಮುತ್ತಿರುವೆ ನೀ.. ಪ್ರತಿ ಇರುಳು ಕನಸಲಿ, ಪ್ರತಿ ಇರುಳು ಕನಸಲಿ ಸಮಯ ಸರಿಯುತಿದೆ ನಿನ್ನ ನೆನಪಿನಪ್ಪುಗೆಯಲ್ಲಿ, ಬಂಧಿಸಿಹೆ ನೀ ಪ್ರೀತಿ ಸಂಕೋಲೆಯಲಿ ದಾಳಿಯಾಗಿದೆ ನಿನ್ನ ಮಾತು ಮುತ್ತಿನಲಿ, ಸೆರೆಯಾಳು ನೀನು ಶಿಕ್ಷೆ ನನಗಿಲ್ಲಿ, ಸೆರೆಯಾಳು ನೀನು, ಶಿಕ್ಷೆ ನನಗಿಲ್ಲಿ   <3   <3   <3   <3   <3   <3 ಮುಗಿಲಾ ನೋಡುತಾ ಮಳೆಗೆ ಕಾಯುವಾ  ಕಣ್ಣಿಗೆ ಸಿಲುಕಿದೆ ಗಾಳಿಯಾ ಕಸಗಳು, ಬಿತ್ತಿದಾ ಬೀಜವು ಹೊರಗೆ ಇಣುಕಲು  ತೇವದಾ ಕೊರತೆಗೆ ಬೆಳೆಯಿಂದು ಕಂಗಾಲು...   ಉ...